ನಮ್ಮ ದೇವರು

ಕರ ಮುಗಿದು ಬೇಡುವೆನು ನಿನಗೆ
ಹರಸು ಬಾರಮ್ಮ ಭೂಮಿ ತಾಯೇ
ಮುನಿಸಿಕೊಳ್ಳದಿರು ಅನವರತ
ನೀ ನಮ್ಮ ಜೀವದಾತೆ.

ಲೆಕ್ಕವಿಲ್ಲದ ದೇವರುಗಳೆಲ್ಲ
ನಿನ್ನ ತೆಕ್ಕೆಯಲ್ಲಿ ಬೆಳೆದವರು
ಯಾವ ದೇವರು ಕೊಡದಿರುವ
ಕಾಣಿಕೆಗಳನ್ನು ನಿನ್ನಿಂದಲೇ ಪಡೆದಿಹೆವು.

ಮುಕ್ಕೋಟಿ ದೇವರುಗಳು ಮುನಿಸಿಕೊಂಡರೂ
ನಾವು ಬದುಕಿ ಬಾಳ ಬಲ್ಲೆವು
ನೀನು ಮುನಿದು ಕೋಪಿಸಿಕೊಂಡರೆ
ಬದುಕಿ ಉಳಿಯಬಲ್ಲೆವೇ ನಾವು.

ಜೀವ ಜೀವಿಗಳೆಲ್ಲ ನಿನ್ನನ್ನೆ ನಂಬಿಹರು
ಹಿಡಿ ಬಿತ್ತಿದರೆ ಕುಡುಕೆ ಫಲವ ಕೊಡುವ
ಜೀವನದ ಅಕ್ಷಯ ಪಾತ್ರೆಯು ನೀನು
ಬದುಕಿಸಿ ಸಲುಹುತ್ತಿರುವೆ ನೀ ಎಲ್ಲರನ್ನು.

ಕಂದನ ಹೊಲಸಿಗೆ ಹೇಸದ ತಾಯಿಯಂತೆ
ಎಲ್ಲರ ಹೊಲಸ ಸಹಿಸಿ ಕ್ಷಮಿಸಿ ಪಾಪವ ಕಳೆವೆ
ಪಡೆದ ತೃಣವೆಲ್ಲವೂ ನಿನ್ನ ಒಡಲ ಕಾಣಿಕೆಯದು
ಮತ್ತೆ ಸೇರುವೆವು ಕೊನೆಗೆ ನಿನ್ನ ಒಡಲೊಳಗೇನೆ.

ನಿತ್ಯ ಸುಂದರ ಸುಮಂಗಲಿ ನೀನಾಗಿಹೆ
ಜೀವಗಳ ಜೀವದುಸಿರು ನೀನಾಗಿಹೆ
ಹಸಿರು ಸಿರಿಯ ಹೊತ್ತು ಭೂ ಮಾತೆ
ಜೀವಿಗಳೆಲ್ಲವ ಸಲಹಮ್ಮ ಲೋಕಮಾತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾಜಿನ ಮನೆಯವರು
Next post ಗರುಡ ಗಂಭ

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

cheap jordans|wholesale air max|wholesale jordans|wholesale jewelry|wholesale jerseys